NewsHour ಕರ್ನಾಟಕದಲ್ಲಿ ಅಮಿತ್ ಶಾ ಪ್ರಚಾರ,ಸಿದ್ದುಗೆ ತಿರುಗುಬಾಣವಾಗುತ್ತಾ ಲಿಂಗಾಯಿತ ಅಸ್ತ್ರ!

Apr 24, 2023, 11:39 PM IST

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗೆ ಅಮಿತ್ ಶಾ ವಿಶೇಷ ಗಮನಕೇಂದ್ರಿಕರಿಸಿದ್ದಾರೆ. ಇಂದು ಹಳೇ ಮೈಸೂರು ಭಾಗದಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳ ಪರ ಮತಭೇಟೆ ನಡೆಸಿದ್ದಾರೆ.ಮೈಸೂರಿಗೆ ಆಗಮಿಸಿದ ರಾಮದಾಸ್ ಅವರನ್ನು ಟಿಕೆಟ್ ಕೈತಪ್ಪಿದ ಹಾಲಿ ಶಾಸಕ ರಾಮದಾಸ್ ಅತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ರಾಮದಾಸ್ ಅವರನ್ನು ಆಲಂಗಿಸಿದ ಅಮಿತ್ ಶಾ, ಬಳಿಕ ಕಾರಿನಲ್ಲಿ ಕೂರಿಸಿ ಚಾಮುಂಡಿ ಕ್ಷೇತ್ರಕ್ಕೆ ತೆರಳಿದರು. ಈ ವಿಡಿಯೋ ವೈರಲ್ ಆಗಿದೆ. ಇತ್ತ ಲಿಂಗಾಯಿತ ಭ್ರಷ್ಟ ಸಿಎಂ ಅನ್ನೋ ಸಿದ್ದರಾಮಯ್ಯ ಹೇಳಿಕೆ ಇದೀಗ ಕಾಂಗ್ರೆಸ್‌ಗೆ ತಲೆನೋವು ಹೆಚ್ಚಿಸಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಲವು ಪ್ರಯತ್ನ ಮಾಡುತ್ತಿದೆ. ಆದರೆ ಬಿಜೆಪಿ ಇದೇ ವಿಚಾರ ಮುಂದಿಟ್ಟು ಹಿಗ್ಗಾ ಮುಗ್ಗಾ ಜಾಡಿಸಿದೆ.