ಶಿಗ್ಗಾಂವಿಯಲ್ಲಿ ಅಖಾಡಕ್ಕಿಳಿದ ಸಿಎಂ ಬೊಮ್ಮಾಯಿ..ಲಕ್ಕಿ ಕಾರ್ ಮತ್ತೆ ಗೆಲುವಿನ ಲಕ್ ಕೊಡುತ್ತಾ..?

Apr 16, 2023, 10:00 AM IST

ಕರ್ನಾಟಕ ವಿಧಾನಸಭೆ ಚುನಾವಣಾ ರಂಗೇರಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಸಿಎಂ ಬೊಮ್ಮಾಯಿ, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸತತ ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಬಸವರಾಜ ಬೊಮ್ಮಾಯಿ, ಇದೀಗ 4ನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಆದರೆ ಎದುರಾಳಿ ಯಾರೂ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಹಾಗಾದ್ರೆ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಿಲ್ಲ ಯಾಕೆ..? ಕಾಂಗ್ರೆಸ್ ಹೆಣೆದ ಚಕ್ರವ್ಯೂಹವೇನು..? ಈ ವಿಡಿಯೋ ನೋಡಿ