Megafight: ಚಾಮುಂಡೇಶ್ವರಿಯಲ್ಲಿ ರಣರೋಚಕ ಮೆಗಾಫೈಟ್..ಘಟಾನುಘಟಿ ನಾಯಕರ ನಡುವೆ ಟಾಕ್ ವಾರ್

Apr 17, 2023, 4:23 PM IST

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಈ ಮಧ್ಯೆಚಾಮುಂಡೇಶ್ವರಿಯಲ್ಲಿ ರಣರೋಚಕ ಮೆಗಾಫೈಟ್‌ನ್ನು ಏಷ್ಯಾನೆಟ್​ ಸುವರ್ಣ ನ್ಯೂಸ್ ನಡೆಸಿದೆ. ಇಲ್ಲಿ ಘಟಾನುಘಟಿ ನಾಯಕರ ದಂಗಲ್ , ಕಾರ್ಯಕರ್ತರ ನಡುವೆ ಟಾಕ್ ವಾರ್ ನೋಡಬಹುದಾಗಿದೆ. ಬಿಜೆಪಿ ಕಾಂಗ್ರೆಸ್‌, ಜೆಡಿಎಸ್‌, ಪಾರ್ಟಿಯಿಂದ ನಾಯಕರು ವೇದಿಕೆಯಲ್ಲಿ ತಮ್ಮ ವಿಚಾರಗಳ ಮಂಥನ ನಡೆಸಿದ್ದಾರೆ. ಕಾಂಗ್ರೆಸ್‌'ನಿಂದ ದೇವರಾಜ್ ಬಿಜೆಪಿಯಿಂದ ರವೀಶ್‌ ಗೌಡರ್‌   ಜೆಡಿಎಸ್‌'ನಿಂದ  ಜವರಪ್ಪ ಭಾಗಿಯಾಗಿದ್ದರು. ಇನ್ನು ಹೈ ವೋಲ್ಟೇಜ್‌ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವರರು ಯಾರು? ಚಾಮುಂಡೇಶ್ವರಿ ಜನರ ಒಲವು ಯಾರ ಕಡೆ? ಅಭ್ಯರ್ಥಿಗಳು ಹೇಳುವುದೇನು? ಈ ಎಲ್ಲಾ ವಿಚಾರಗಳನ್ನು  ಚಾಮುಂಡೇಶ್ವರಿ ಅಭ್ಯರ್ಥಿಗಳು, ಪಕ್ಷದ ಮುಖಂಡರು ನೇರಾನೇರ ಚರ್ಚೆ ನಡೆಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.