ಕೊನೆಗೂ ರಾಜೀನಾಮೆ ರಹಸ್ಯ ಬಿಚ್ಚಿಟ್ಟ MTB ನಾಗರಾಜ್!

Oct 19, 2019, 4:44 PM IST

ಬೆಂಗಳೂರು (ಅ.19): ಹೊಸಕೋಟೆ ಅನರ್ಹ ಶಾಸಕ ಎಂ.ಟಿ. ಬಿ. ನಾಗರಾಜ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಿಕ್ಕೆ ಕಾರಣ ಏನು? ಏನಲ್ಲ? ಎಂದು ಬಹಿರಂಗಪಡಿಸಿದರು. 

ಕಳೆದ ಜುಲೈ ತಿಂಗಳಿನಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು.

ಪಕ್ಕಾ ಕಾಂಗ್ರೆಸ್ಸಿಗ, ಸಿದ್ದರಾಮಯ್ಯ ಅತೀ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂ.ಟಿ.ಬಿ. ರಾಜೀನಾಮೆ ತೀವ್ರ ಕುತೂಹಲ ಕೆರಳಿಸಿತ್ತು.