' ಇನ್ನೂ ಎರಡೂವರೆ ವರ್ಷ ಬಿಎಸ್‌ವೈ ನಮ್ಮ ಸಿಎಂ, ನಾಯಕತ್ವ ಬದಲಾವಣೆ ಇಲ್ರೀ'

Jan 11, 2021, 3:19 PM IST

ಬೆಂಗಳೂರು (ಜ. 11): ಸಿಎಂ ಬದಲಾವಣೆ ವಿಚಾರ ಆಗಾಗ ಸದ್ದು ಮಾಡುತ್ತದೆ. ಈ ಪ್ರಶ್ನೆಗೆ ರೇಣುಕಾಚಾರ್ಯ ' ರಾಜ್ಯದಲ್ಲಿ ನಾಯಕತ್ವ ಬದಲಾವಣೆಯೇ ಇಲ್ಲ.  ಸೂರ್ಯ, ಚಂದ್ರರಷ್ಟೇ ಬಿಎಸ್‌ವೈ ಇನ್ನೂ ಎರಡೂವರೆ ವರ್ಷ ಸಿಎಂ ಆಗಿರ್ತಾರೆ ಅನ್ನೋದು ಅಷ್ಟೇ ಸತ್ಯ. ನಾಯಕತ್ವ ಬದಲಾವಣೆ ವದಂತಿಗಳೆಲ್ಲಾ ಸುಳ್ಳು' ಎಂದು ಹೇಳಿದ್ದಾರೆ. 

ವಿಸ್ತರಣೆ ಪಕ್ಕಾ ಆಗ್ತಿದ್ದಂತೆ ನಾನು ಕೂಡಾ ಪ್ರಬಲ ಆಕಾಂಕ್ಷಿ, ಶಾಸಕರ ವರಸೆ ಶುರು

'ನಾನು ಕೂಡಾ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಮಧ್ಯ ಕರ್ನಾಟಕಕ್ಕೆ ಒಂದು ಸ್ಥಾನ ನೀಡಲು ಕೇಳಿದ್ದೇವೆ. ಹೈಕಮಾಂಡ್ ಯಾವ ರೀತಿ ನಿರ್ಧರಿಸುತ್ತಾರೋ ನೋಡಬೇಕಿದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.