ಪರಿಷತ್‌ನಲ್ಲಿ ಕೈ ನಾಯಕರ ಹೈಡ್ರಾಮ; ಗೃಹ ಸಚಿವರು ಗರಂ

Dec 15, 2020, 5:34 PM IST

ಬೆಂಗಳೂರು (ಡಿ. 15): ಸಭಾಪತಿಗಳ  ಕುರ್ಚಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್ - ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ. ರಾಜ್ಯದ ಮಾನ ಮರ್ಯದೆ ತೆಗೆಯುವ ಕೆಲಸ ಮಾಡಿದ್ದಾರೆಂದು ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. 

'ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು, ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು'

ಕೈ ನಾಯಕರ ಹೈಡ್ರಾಮಕ್ಕೆ ಗೃಹ ಸಚಿವ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. 'ಕಾಂಗ್ರೆಸ್ ನಾಯಕರು ಶಾಂತಿಯುತವಾಗಿ ಸಭೆ ನಡೆಸಬಹುದಿತ್ತು. ಆದರೆ ಹೈಡ್ರಾಮದಿಂದಾಗಿ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಯ್ತು. ಸಭಾಪತಿ ಪೀಠಕ್ಕೆ ಕಳಂಕ ತರುವ ಕೆಲಸ ಮಾಡಿದ್ಧಾರೆ' ಎಂದು ಬೊಮ್ಮಾಯಿ ಹೇಳಿದ್ದಾರೆ.