'ಕೈ' ಅಭ್ಯರ್ಥಿ ದೀಪಕ್‌ ಚಿಂಚೋರೆ ಅಬ್ಬರದ ಪ್ರಚಾರ: ಬಿಜೆಪಿ ವೈಫಲ್ಯ ಪ್ರಸ್ತಾಪಿಸಿ ಮತಶಿಕಾರಿ

Apr 22, 2023, 4:31 PM IST

ಧಾರವಾಡ: ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಿರಿಯ ಮುಖಂಡ ದೀಪಕ್‌ ಚಿಂಚೋರೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಏ.21 ರಂದು ಅವರು ಕಾಂಗ್ರೆಸ್‌ ಕಚೇರಿ ಉದ್ಘಾಟಿಸಿದ್ದು, ಇಂದು ವಕೀಲರ ಸಂಘದಲ್ಲಿ ಸಭೆ ಮಾಡಿ ಮತಯಾಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅರವಿಂದ್‌ ಬೆಲ್ಲದ್‌ ವೈಫಲ್ಯಗಳ ಪ್ರಸ್ತಾಪ ಮಾಡಿ, ಪ್ರಚಾರ ಮಾಡುತ್ತಿದ್ದಾರೆ. ಹುಬ್ಬಳ್ಳಿ -ಧಾರವಾಡ ಪಶ್ಚಿಮ ಕ್ಷೇತ್ರದ ಕೆಯುಡಿ ಮೈದಾನಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿ,  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯುವಕರು ಕಾಂಗ್ರೆಸ್‌ ಪರ ಮತಚಲಾಯಿಸುವಂತೆ ಮನವಿ ಮಾಡಿದ್ದಾರೆ. ಮೂವತ್ತು ವರ್ಷದಿಂದ ತಂದೆ ಮಕ್ಕಳಿಗೆ ಅವಕಾಶ ಕೊಟ್ಟಿದ್ದೀರಿ. ಒಂದು ಬಾರಿ ನಮಗೆ ಅವಕಾಶ ನೀಡಿ ಎಂದು ದೀಪಕ್‌ ಚಿಂಚೋರೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಇದೆ ವೇಳೆ ಜೆಡಿಎಸ್‌ನಿಂದ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ ಸೇರಿದ್ದಾರೆ. 

ಇದನ್ನೂ ವೀಕ್ಷಿಸಿ: ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ: ಲಿಂಗಾಯತ ಮತಕ್ಕಾಗಿ 'ಕೈ' ಹೊಸ ತಂತ್ರ