ಸಿದ್ದರಾಮಯ್ಯ ಸರ್ಕಾರಕ್ಕೆ ಬಂಡೆಯ ಶ್ರೀರಕ್ಷೆ, ದಳಪತಿ-ಕಮಲಾಧಿಪತಿಗಳಿಗೆ ಬಿಗ್ ಶಾಕ್ ಕೊಟ್ಟ ಸಿಎಂ-ಡಿಸಿಎಂ?

Aug 10, 2024, 1:18 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ ಶಿವಕುಮಾರ್ ಕಡೆಯಿಂದ ಬಂಡೆಯಂಥಾ ಕವಚ ಸಿಕ್ಕಂತಾಗಿದೆ. ಈ ಇಬ್ಬರೂ ಅತಿರಥರು ಸೇರಿ, ಎದುರು ತಿರುಗಿರೋ ದೋಸ್ತಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ದೋಸ್ತಿ ಪಾಳಯದ ಪಾದಯಾತ್ರೆ ಅಸ್ತ್ರಕ್ಕೆ. ಸಮಾವೇಶ ಅನ್ನೋ ಪ್ರತ್ಯಸ್ತ್ರ ಹೂಡಿದ್ದಾರೆ. ಈ ಎರಡೂ ಉಭಯ ಪಡೆಗಳ ಅಟ್ಟಹಾಸಕ್ಕೆ ಮೈಸೂರು ರಣಾಂಗಣವಾಗಿ ಬದಲಾಗಿದೆ. ಅಂದ ಹಾಗೆ, ಕಮಲದಳದ ಮೇಲೆ ನಡೆದಿರೋ ಹಸ್ತ  ಪ್ರಯೋಗದಲ್ಲಿ ಗೆಲ್ಲೋದ್ಯಾರು?