ವಯಸ್ಸು ಕೇಳಿದ್ದಕ್ಕೆ ಸೈಲೆಂಟ್‌ ಆಗಿ ಹೊರಟ ಯಡಿಯೂರಪ್ಪ

Feb 26, 2020, 5:50 PM IST

ಕೊಪ್ಪಳ, (ಫೆ.26): ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಹೇಳುವವರಿಗೆ ಒಳ್ಳೆಯದಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.

ಹುಟ್ಟುಹಬ್ಬ ದಿನದಂದು ಹೊಸ ಮನೆಗೆ ಯಡಿಯೂರಪ್ಪ ಶಿಫ್ಟ್..! 

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಹಲವು ಬಿಜೆಪಿ ಮುಖಂಡರು ವರಿಷ್ಠರಿಗೆ ದೂರು ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ವಯಸ್ಸಾಗಿದೆ ಎನ್ನುವವರಿಗೆ ಒಳ್ಳೆಯದಾಗಲಿ ಎಂದು ಹೇಳಿ ಹೊರಟರು. ಪತ್ರಕರ್ತರ ಪ್ರಶ್ನೆಗೆ ಆಕ್ರೋಶದಿಂದಲೇ ಸಿಎಂ ಉತ್ತರಿಸಿ ತೆರಳಿದರು.