ಬೊಮ್ಮಾಯಿ ಚಕ್ರವ್ಯೂಹಕ್ಕೆ ಇನ್ನಷ್ಟು ಶಕ್ತಿ.. ಶಿಗ್ಗಾವಿ ಕೋಟೆ ಸುಭದ್ರ..!

Apr 3, 2023, 10:48 AM IST

ಚುನಾವಣೆ  ಹತ್ತಿರವಾಗುತ್ತಿದ್ದಂತೆ ಬೊಮ್ಮಾಯಿ ಚಕ್ರವ್ಯೂಹಕ್ಕೆ ಮತ್ತಷ್ಟು ಶಕ್ತಿ ಹೆಚ್ಚಿದಂತಾಗಿದ್ದು, ಸಿಎಂ ಬೊಮ್ಮಾಯಿಗೆ ಇನ್ಮುಂದೆ ಶಿಗ್ಗಾವಿ ಕೋಟೆ ಮತ್ತಷ್ಟು ಸುಭದ್ರವಾಗಿದೆ. ಯಾಕೆಂದ್ರೆ ಸಿಎಂ ಬೊಮ್ಮಾಯಿಗೆ, ಜಯ ಮೃತ್ಯುಂಜಯ ಮತ್ತು ವಚನಾನಂದ ಸ್ವಾಮೀಜಿಗಳ ಬೆಂಬಲ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್‌ ಇನ್ನು ಸಿಎಂ ಕೋಟೆಗೆ ನುಗ್ಗುವುದು ಕಷ್ಟ. ಇನ್ನು ಪಂಚಮಸಾಲಿ ಲಿಂಗಾಯತ ವೋಟ್ ಒಡೆಯುವ ಪ್ಲಾನ್ ಕಾಂಗ್ರೆಸ್ ಮಾಡಿತ್ತು. ಆದರೆ ಸಿ ಎಂ  ಬೊಮ್ಮಾಯಿ ಕಾಂಗ್ರೆಸ್ ಲೆಕ್ಕಾಚಾರವನ್ನೆಲ್ಲ ಉಲ್ಟಾ ಮಾಡಿದ್ದಾರೆ.  ಜಯಮೃತ್ಯುಂಜಯ್ಯ ಸ್ವಾಮೀಜಿ ಮತ್ತು ವಚನಾನಂದ ಸ್ವಾಮೀಜಿಯವರನ್ನು ಸಿಎಂ ಭೇಟಿಮಾಡಿ ಆಶೀರ್ವಾದ ಪಡೆದು ಬಂದಿದ್ದಾರೆ. ಜಯಮೃತ್ಯುಂಜಯ್ಯ ಸ್ವಾಮಿ ಮತ್ತು ವಚನಾನಂದ ಸ್ವಾಮಿ  ಇಬ್ಬರೂ  ಬಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ ಲಿಂಗಾಯತ ಸಮುದಾಯದ ಜಯಮೃತ್ಯುಂಜಯ್ಯ ಸ್ವಾಮೀಜಿ ಮತ್ತು ವಚನಾನಂದ ಸ್ವಾಮೀಜಿ ಸಿಎಂ ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದು ಏಕೆ? ಸ್ವಾಮಿಗಳ ಬೆಂಬಲ ಸಿಎಂಗಾ ಅಥವಾ ಬಿಜೆಪಿ ಪಕ್ಷಕ್ಕಾ? ಈ ವಿಡಿಯೋ ನೋಡಿ