ಸಂಪುಟಕ್ಕೆ ಯಾರು ಸೇರ್ತಾರೆ, ಯಾರನ್ನ ಕೈಬಿಡ್ತಾರೆ..? ಸವದಿ ಸಾಹೇಬ್ರು ಏನಂತಾರೆ.?

Jan 11, 2021, 2:25 PM IST

ಬೆಂಗಳೂರು (ಜ. 11): ಸಚಿವ ಸಂಪುಟ ವಿಸ್ತರಣೆ ಜ. 13 ಕ್ಕೆ ನಿಗದಿಯಾಗಿದೆ. 7 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಂಭಾವ್ಯ ಸಚಿವರ ಹೆಸರುಗಳು ಓಡಾಡುತ್ತಿದ್ದರೂ, ಇನ್ನೂ ಯಾವುದೂ ಅಧಿಕೃತವಾಗಿಲ್ಲ. 

ಈ ಬಗ್ಗೆ ಹುಬ್ಬಳ್ಳಿಯನ್ನು ಡಿಸಿಎಂ ಸವದಿ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಮಾತ್ರ, ಪುನಾರಚನೆ ಇಲ್ಲ. ಇನ್ನು ಯಾರ್ಯಾರು ಸಂಪುಟ ಸೇರುತ್ತಾರೆ, ಯಾರನ್ನ ಕೈಬಿಡ್ತಾರೆ ಎಂಬ ಮಾಹಿತಿ ಇಲ್ಲ ಎಂದು ಸವದಿ ಸಾಹೇಬ್ರು ಪ್ರತಿಕ್ರಿಯಿಸಿದ್ದಾರೆ.