ಎಂಟರ್ಟೇನ್ಮೆಂಟ್ ಫಿಗರ್ ಎಂದ ಖಾದರ್‌ಗೆ ಜಾಡಿಸಿದ ರೇಣುಕಾಚಾರ್ಯ

Dec 18, 2019, 8:39 PM IST

ಬೆಂಗಳೂರು/ಮಂಗಳೂರು,[ಡಿ.18]: ದೇಶದಲ್ಲಿ ಸದ್ಯ CAB ಕಿಚ್ಚು ಹೊತ್ತಿ ಉರಿಯುತ್ತಿದೆ. ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳಗಳಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನು ಮಂಗಳೂರಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿತು.

ಇದೇ ವೇಳೆ ಮಾಜಿ ಸಚಿವ ಯು.ಟಿ ಖಾದರ್, ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಿದರೆ, ರಾಜ್ಯವೇ ಬೆಂಕಿಯಿಂದ ಹೊತ್ತಿ ಉರಿಯಲಿದೆ ಎಂದರು. ಇದಕ್ಕೆ ಬಿಜೆಪಿ ನಾಯಕರು ಯುಟಿ ಖಾದರ್ ಗೆ ಹಿಗ್ಗಾಮುಗ್ಗಾ ಜಾಡಿಸಿದರು.