‘ಬಿಜೆಪಿ ಸೇರಲಿದ್ದಾರೆ ಇನ್ನಿಬ್ಬರು JDS ಶಾಸಕರು’ ಗುಟ್ಟು ಹೇಳಿದ ಯತ್ನಾಳ್!

Nov 24, 2019, 4:45 PM IST

ಬಾಗಲಕೋಟೆ[ನ. 24] ಕೇಂದ್ರ ಸರ್ಕಾರ ಶೀಘ್ರವಾಗಿ ಬರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದೆ ಎಂದು ಬಿಜೆಪಿ ನಾಐಕರ ವಿರುದ್ಧವೇ ಹೇಳಿಕೆ ನೀಡಿ ಪಕ್ಷದ ಆಕ್ರೋಶಕ್ಕೆ ಗುರಿಯಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಮ್ಮೆ ಮಾತನಾಡಿದ್ದಾರೆ.

ಬಿಜೆಪಿಗೆ ಬರಲು ಅನೇಕ ಜೆಡಿಎಸ್  ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಇಬ್ಬರು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ. ಬೈ ಎಲೆಕ್ಷನ್ ಪ್ರಚಾರದ ಉಸ್ತುವಾರಿ ಹಾಕದಕ್ಕೆ ಯತ್ನಾಳ್ ಅಸಮಾಧಾನ ಹೊರ ಹಾಕಿದರು.  ನಾನು ಮಾತನಾಡಿದ ಪರಿಣಾಮ ಮಲ್ಲಿಕಾರ್ಜುನ ಖರ್ಗೆ ಅಂತವರು ಸೋತ್ರು ಉಮೇಶ್ ಜಾಧವ್ ಅಂತವರು ಗೆದ್ದರು. ನಾನು ನನ್ನದೇ ಶಕ್ತಿಯಿಟ್ಟು ಕೊಂಡಿದ್ದೇನೆ ಎಂದು ಹೇಳಿದರು.