ಬಿಜೆಪಿ ಜತೆ ಮೋದಿ ಇದ್ದಾರೆ, ಕಾಂಗ್ರೆಸ್‌ ಜತೆ ಭ್ರಷ್ಟಾಚಾರಿಗಳಿದ್ದಾರೆ: ಕೈ ವಿರುದ್ಧ ಅಶೋಕ್‌ ಕಿಡಿ

Apr 30, 2023, 5:06 PM IST

ಚನ್ನಪಟ್ಟಣ: ಮಾಜಿ ಸಿಎಂ ಕುಮಾರಸ್ವಾಮಿ ಕೋಟೆಯಲ್ಲಿ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ತನ್ನದೇ ಆದ ರೀತಿಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಅದರಂತೆ ಪ್ರಧಾನಿ ಮೋದಿ ಸಹ ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದು, ಸಚಿವ ಆರ್. ಅಶೊಕ್‌ ಅವರು ಮೋದಿಯವರನ್ನು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅಶೊಕ್, ಕಾಂಗ್ರೆಸ್‌ನವರು ಪದೇ ಪದೇ ನಮಗೆ ಒಂದು ಪ್ರಶ್ನೆ ಕೇಳುತ್ತಾರೆ. ಅದೇನೆಂದರೆ ಮೋದಿಯವರನ್ನು ಯಾಕೆ ಕರೆಸುತ್ತೀರಿ ಎಂದು. ಆದರೆ, ನಾವು ಹೇಳುತ್ತೇವೆ ನಮ್ಮ ಜೊತೆ ಮೋದಿ ಇದ್ದಾರೆ. ಆದರೆ, ನಿಮ್ಮೊಂದಿಗೆ ಭ್ರಷ್ಟಾಚಾರಿಗಳಿದ್ದಾರೆ. ಮೋಸ, ವಂಚನೆ ಕಾಂಗ್ರೆಸ್‌ನವರ ಮನೆಮಾತು ಎಂದು ಹರಿಹಾಯ್ದರು. ಇದೇ ನಮ್ಮ ಪಕ್ಷಕ್ಕೂ ನಿಮ್ಮ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದರು. 

ಇದನ್ನೂ ವೀಕ್ಷಿಸಿ: ತವರು ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ: ಹಾವೇರಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ