Panchanga: ಇಂದು ನೀರು ತುಂಬುವ ಹಬ್ಬ, ಹಿನ್ನೆಲೆ ಏನು?

Oct 23, 2022, 10:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಭಾನುವಾರ, ತ್ರಯೋದಶಿ ತಿಥಿ, 
 ಉತ್ತರ ಫಲ್ಗುಣಿ ನಕ್ಷತ್ರ.
ಆಶ್ವೀಜ ಮಾಸದ ಕೃಷ್ಣಪಕ್ಷದ ತ್ರಯೋದಶಿಯಿಂದ ದೀಪಾವಳಿ ಆರಂಭ. ಈ ದಿನ ಧನ ತ್ರಯೋದಶಿಯಾಗಿದ್ದು, ಆಡುಭಾಷೆಯಲ್ಲಿ ನೀರು ತುಂಬೋ ಹಬ್ಬ ಎನಿಸಿಕೊಂಡಿದೆ. ಈ ಹಬ್ಬದ ಪ್ರಾಮುಖ್ಯತೆ, ಹಿನ್ನೆಲೆ ವಿವರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 

ಎಲ್ಲರೊಳಗಿನ ದೀಪ ಎಲ್ಲರನ್ನೂ ಬೆಳಗಲಿ