Panchanga: ಸೋಮವಾರ, ಏಕಾದಶಿ, ಶಿವ ಕೇಶವರ ಆರಾಧನೆಯಿಂದ ವಿಶೇಷ ಅನುಕೂಲ

Aug 8, 2022, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಜ್ಯೇಷ್ಠ ನಕ್ಷತ್ರ, ಏಕಾದಶಿ ತಿಥಿ, ಇಂದು ಸೋಮವಾರ. ಸೋಮವಾರ ಏಕಾದಶಿ ಬಂದಿರುವುದರಿಂದ ಶಂಕರ ನಾರಾಯಣ, ಶಿವ ಕೇಶವರ ಪ್ರಾರ್ಥನೆ, ಆರಾಧನೆ ಮಾಡಬೇಕು. ಹರಿಹರ ಇಬ್ಬರಲ್ಲೂ ಭೇದವಿಲ್ಲ ಎನ್ನುತ್ತದೆ ಶಾಸ್ತ್ರ.