ಪಂಚಾಂಗ: ಸೂರ್ಯನ ಆರಾಧನೆಯಿಂದ ಶುಭ, ತಂಬಿಗೆ ನೀರಿನಲ್ಲಿ ಕೆಂಪು ದಾಸವಾಳ ಅರ್ಪಿಸಿ!

May 31, 2020, 10:21 AM IST

31 ಮೇ 2020, ಭಾನುವಾರದ ಪಂಚಾಂಗ| ಭಾನುವಾರ ಸೂರ್ಯನ ಆರಾಧನೆ ಮಾಡಬೇಕು. ಆರೋಗ್ಯ ಸಿದ್ಧಿಗಾಗಿ ಸೂರ್ಯನನ್ನು ಪೂಜಿಸಬೇಕು. ಸೂರ್ಯನ ಮಂತ್ರ ಕೆಳುವುದರಿಂದ ಅಥವಾ ಪಠಿಸುವುದರಿಂದ ಆರೋಗ್ಯ ಸಿದ್ಧಿಯಾಗುತ್ತದೆ. ಆತ್ಮ ಶಕ್ತಿ ಜಾಗೃತಿಯಾಗಿರಲು ಸೂರ್ಯನ ಅನುಗ್ರಹ ಅಗತ್ಯ. ಹೀಗಾಗಿ ತಾಮ್ರದ ಒಂದು ತಂಬಿಗೆ ತುಂಬಾ ನೀರು ತುಂಬಿ ಅದರಲ್ಲಿ ಒಂದು ಕೆಂಪು ದಾಸವಾಳ ಅಥವಾ ಕೆಂಪು ಕಣಗಲೆ ಹೂವನ್ನು ಹಾಕಿ ಅದನ್ನು ಅರ್ಘ್ಯದ ರೂಪದಲ್ಲಿ ನೀಡಿದರೆ ಆತ ಸಂಪ್ರೀತನಾಗುತ್ತಾನೆ. ಹೀಗಾಗಿ ನಿಮ್ಮ ಯಥಾಶಕ್ತಿ, ಅನುಕೂಲದಂತೆ ಸೂರ್ಯನನ್ನು ಆರಾಧಿಸಿ.