ಲಂಕಾ ಸ್ಟೋಟಕ್ಕೆ ಜೆಡಿಎಸ್ ಮುಖಂಡರು ಬಲಿ: ಮೊಯ್ಲಿ ಸಂತಾಪ

Apr 22, 2019, 5:00 PM IST

ಕೊಲಂಬೋ[ಏ.22]: ಶ್ರೀಲಂಕಾದಲ್ಲಿ ಉಗ್ರರ ಅಟ್ಟಹಾಸಕ್ಕೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇವರಲ್ಲಿ ಐದು ಮಂದಿ ಕನ್ನಡಿಗರೂ ಸೇರಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದಿದೆ, ಇದರ ಪ್ರಚಾರ ಕಾರ್ಯದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸಿದ್ದ ಜೆಡಿಎಸ್ ಮುಖಂಡರೂ ಈ ಸ್ಫೋಟದಲ್ಲಿ ಬಲಿಯಾಗಿದ್ದಾಋಎ ಎಂಬ ಮಹಿತಿ ಲಭ್ಯವಾಗಿದೆ. ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದ ಮುಖಂಡರು ರಿಲ್ಯಾಕ್ಸ್ ಮಾಡಲೆಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ದುರಾದೃಷ್ವಶಾತ್ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ