Jun 16, 2019, 1:00 PM IST
ಬೆಂಗಳೂರು[ಜೂ.16]: ಜಿಂದಾಲ್ಗೆ ಭೂಮಿ ನೀಡಿಕೆ ವಿರೋಧಿಸಿ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಅಹೋ ರಾತ್ರಿ ಧರಣಿ ಆರಂಭಿಸಿದ್ದರು. ಇಂದು ಭಾನುವಾರ ರ್ಯಾಲಿ ಮೂಲಕ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದರಾವ್ ಸರ್ಕಲ್ನಿಂದ ಹೊರಟ ಈ ರ್ಯಾಲಿಯನ್ನು ಶಿವಾನಂದ ಸರ್ಕಲ್ ಬಳಿಯೇ ಪೊಲೀಸರು ತಡೆದಿದ್ದಾರೆ. ಯಡಿಯೂರಪ್ಪ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್. ಅಶೋಕ್ರನ್ನು ಹೊತ್ತುಕೊಂಡೇ ಬಂದ ಪೊಲೀಸರು ಬಸ್ಗೇರಿಸಿದ್ದಾರೆ. ಈ ವೇಳೆ ನಡೆದ ಎಳೆದಾಟದಲ್ಲಿ ಅವರ ಕೈಗೆ ಗಾಯಗಳಾಗಿದ್ದು, ವಾಗ್ವಾದ ಉಂಟಾಗಿದೆ.