ನೆರೆ ವೀಕ್ಷಣೆಗೆ ಬಂದ ಶ್ರೀರಾಮುಲು ಸಭೆಗೆ BJP ಅಸಮಾಧಾನ ಶಾಸಕ ಚಕ್ಕರ್

Aug 22, 2019, 9:55 PM IST

ಯಾದಗಿರಿ, [ಆ.22]: ಮಂಗಳವಾರ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ನೂತನ ಸಚಿವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳಿತ್ತ ತೆರಳಿದ್ದು, ಪರಿಹಾರದ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿ  ಜತೆ ಚರ್ಚೆ ನಡೆಸಿದ್ದಾರೆ. ಆದ್ರೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿರುವ ಯಾದಗಿರಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಸಭೆಗೆ ಹೋಗದೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.