‘ಹೌದು.... ಬಿಜೆಪಿಯಿಂದ ಹಣದ ಆಫರ್ ಬಂದಿರೋದು ನಿಜ’

Jul 4, 2019, 1:14 PM IST

ಮಡಿಕೇರಿ (ಜು.04):  ಸರ್ಕಾರವನ್ನು ಬೀಳಿಸಲು ಬಿಜೆಪಿಯು ಮೈತ್ರಿ ಶಾಸಕರಿಗೆ ಹಣದ ಆಮಿಷವೊಡ್ಡಿರೋದು ನಿಜ. ರಮೇಶ್ ಜಾರಕಿಹೊಳಿ ಸೇರಿದಂತೆ ನನಗೂ ಬಿಜೆಪಿಯಿಂದ ಆಫರ್ ಇತ್ತು. ಹಣ ತೆಗೆದುಕೊಂಡು ರಾಜೀನಾಮೆ ನೀಡಿ, ಚುನಾವಣೆ ಖರ್ಚು ನೋಡ್ಕೋತೀವಿ, ಎಷ್ಟು ಹಣ ಬೇಕಾದ್ರೂ ಕೊಡ್ತೀವಿ ಎಂಬ ಆಫರ್ ನೀಡಲಾಗಿತ್ತು ಎಂದು ಪಿರಿಯಪಟ್ಟಣ ಶಾಸಕ ಕೆ. ಮಹದೇವು ಹೇಳಿದ್ದಾರೆ. ಈ ಬಗ್ಗೆ  ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಮಹಾದೇವು ವಿವರಣೆ ನೀಡಿದ್ದಾರೆ.