ನ್ಯೂಸ್‌ ಅವರ್ ಸ್ಪೆಶಲ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ .... ಏನಂದ್ರು ರಾಮಲಿಂಗಾರೆಡ್ಡಿ ?

Apr 11, 2023, 12:32 PM IST

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರ ಬೇಕು . ಏಕೆಂದರೆ ಬಿಜೆಪಿ ಪಕ್ಷ ಮಾಡಿರುವಂತ ತಪ್ಪುಗಳು ,ಬಿಜೆಪಿ  ಕೊಟ್ಟಿರುವಂತಹ ಆಶ್ವಾಸನೆಗಳನ್ನು ಸ್ವಲ್ಪನೂ ಜಾರಿಗೆ ತಂದಿಲ್ಲ ಎಂದಿದ್ದಾರೆ. ಅದೇ ಕಾಂಗ್ರೆಸ್‌ ಪಕ್ಷ 155  ಆಶ್ವಾಸನೆಗಳನ್ನು 2013 ರಲ್ಲಿ ಕೊಟ್ಟು ಅಷ್ಟುನು ಜಾರಿಗೆ ತಂದಿದ್ದವಿ. ಅದಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬೆಲೆ ಏರಿಕೆ , ಭ್ರಷ್ಟಾಚಾರ ಆಡಳಿತವನ್ನು ನಡೆಸುತ್ತಿರುವ ಒಂದು ವೈಕರಿಯಿಂದ ಜನಕ್ಕೆ ಸಹಜವಾಗಿ ಬೇಸರವಾಗಿದೆ. ಬಿಜೆಪಿಯನ್ನು ಜನ ಈ ಭಾರಿ ಬೆಂಬಲಿಸಲ್ಲ , ಕೇಸರಿ ಪಾಳ್ಯದ  ನಾಯಕತ್ವದಲ್ಲಿ ಕೊರತೆ ಇದೆ ಹೀಗಾಗಿ ಮತದಾರರು ಕಾಂಗ್ರೆಸ್‌ಗೆ ಒಲಸೆ ಬರುತ್ತಾರೆ ಎಂದು ತಿಳಿಸಿದರು . ಇನ್ನು ಕಾಂಗ್ರೆಸ್‌ ನಲ್ಲಿ ಒಂದೇ ಬಣ ಆದರೆ ನಾಯಕರು ಜಾಸ್ತಿ ಇದ್ದಾರೆ ಖರ್ಗೆಗೆ ಬಣದ ಅವಶ್ಯಕತೆ ಇಲ್ಲ ಎಂದು  ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ