ದಾವಣಗೆರೆಯಲ್ಲಿ ಎಲ್ಲವೂ ಸ್ತಬ್ಧ, ದಿನಸಿ ಅಂಗಡಿಗಳಿಗೂ ಬೀಗ!

May 24, 2020, 4:02 PM IST

ದಾವಣಗೆರೆ(ಮೇ.24) ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಹೇರಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕಷ್ಟೇ ಅವಕಾಶ ನೀಡಿದೆ. ಹೀಗಿರುವಾಗ ದಾವಣಗೆರೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.

ಹೌದು ದಾವಣಗೆರೆ ಜಿಲ್ಲೆಯಲ್ಲಿ ಜನರು ಸರ್ಕಾರದ ಈ ಕ್ರಮಕ್ಕರೆ ಸಂಪೂರ್ಣ ಸಾತ್ ನೀಡಿದ್ದಾರೆ. ಆಟೋ, ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿವೆ.

ಇನ್ನು ಅವಶ್ಯಕ ವಸ್ತುಗಳಾದ ಹಾಲು, ದಿನಸಿ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆಯಾದರೂ ಇವುಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿಲ್ಲ ಎಂಬುವುದು ಉಲ್ಲೇಖನೀಯ.