ಹಳ್ಳಿ ಮೇಷ್ಟ್ರಾದ ಹರತಾಳು ಹಾಲಪ್ಪ, ಜ್ಞಾನ ಭಂಡಾರಕ್ಕೆ ದಂಗಾದ ಸರ್ಕಾರಿ ನೌಕರರು..!

Jul 3, 2021, 6:15 PM IST

ಶಿವಮೊಗ್ಗ (ಜು. 03): ಇದು ಶಾಸಕರೊಬ್ಬರು ಹಳ್ಳಿ ಮೇಷ್ಟ್ರಾದ ಕಥೆ. ಕಾರ್ಯಕ್ರಮ ವೊಂದರಲ್ಲಿ ಶಾಸಕರ ಜ್ಞಾನ ಭಂಡಾರ ಕಂಡು ಸರ್ಕಾರಿ ನೌಕರರು ದಂಗಾದ ಪ್ರಸಂಗ. ಹೌದು ಸಾಗರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಾಸಕ ಹರತಾಳು ಹಾಲಪ್ಪ ನವರು ಮಲೆನಾಡಿನ ಪರಿಸರದ ಅರ್ಜಿನ್ ಜಬ್ಬು ಮೀನಿನ ಪ್ರಭೇದ, ಮುರ್ಗೊಡ್ ಮೀನು, ವಲಸೆ ಪಕ್ಷಿಗಳು,  ಆಮೆಯ ಆಹಾರ ಮತ್ತು ಆಯಸ್ಸು ಇವುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೇ ನೆರೆದವರು ಅಬ್ಬ ಎಂದು ಮೂಗಿನ ಮೇಲೆ ಬೆರಳು ಇಟ್ಟಿದ್ದರು. ಇಷ್ಟಕ್ಕೂ ಶಾಸಕರ ಭಾಷಣದಲ್ಲಿ ಹೇಳಿದ್ದೇನು ನೀವೇ ನೋಡಿ.