Belagavi: ಮಲಪ್ರಭಾ ಸಕ್ಕರೆ ಕಾರ್ಖಾನೆ ಗೋಲ್‌ಮಾಲ್‌ ಕೇಸ್‌: ತನಿಖೆಗೆ ಆದೇಶ

Jan 22, 2022, 10:30 AM IST

ಬೆಳಗಾವಿ(ಜ.22):  ಬೆಳಗಾವಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗೋಲ್‌ಮಾಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.  ರೈತರು, ಅಮಾಯಕರ ಹೆಸರಿನಲ್ಲಿ ಕಾರ್ಖಾನೆ ಸಾಲ ತೆಗೆದುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ್‌ ಬಾಗವಾನ್‌ ವಿರುದ್ಧ ಆರೋಪಿಸಲಾಗಿದೆ. ರೈತರ ದೂರು ಆಧರಿಸಿ ಸಕ್ಕರೆ ಸಚಿವರ ನಿರ್ದೇಶನದ ಮೇರೆಗೆ ತನಿಖೆ ಶುರುವಾಗಿದೆ ಅಂತ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ.  

Karnataka Politics: 'ನಾಯಕತ್ವ ಬದಲಾವಣೆಯಿಲ್ಲ, ಮುಂದಿನ ಚುನಾವಣೆಗೂ ಬೊಮ್ಮಾಯಿಯದ್ದೇ ನೇತೃತ್ವ'