ಬೀದರ್‌: ಜಿಲ್ಲಾ ಸಂಕೀರ್ಣ ನಿರ್ಮಾಣ ಪಾಲಿಟಿಕ್ಸ್‌ ಜೋರು

Aug 30, 2021, 10:13 AM IST

ಬೀದರ್‌(ಆ.30): ಬೀದರ್‌ನಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ ವಿಚಾರದಲ್ಲಿ ರಾಜಕೀಯ ಜೋರಾಗಿ ನಡೆಯುತ್ತಿದೆ. ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ 50 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಎಲ್ಲಿ ನಿರ್ಮಾಣ ಮಾಡಬೇಕು ಅನ್ನೋದೆ ದೊಡ್ಡ ಗೊಂದಲವಾಗಿದೆ. ಜಿಲ್ಲಾ ಸಂಕೀರ್ಣ ಈಗ ಎಲ್ಲಿ ಇದೆಯೋ ಅಲ್ಲೇ ಇರಲಿ ಅಂತ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ರೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್‌ ವಿರೋಧ ವ್ಯಕ್ತಪಡಿಸಿದ್ದಾರೆ. 

ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ : ಲೀಡರ್ಸ್ ಜೊತೆಗೆ ಮಹತ್ವದ ಮೀಟಿಂಗ್