ಕೊರೋನಾ ಭೀತಿ: ಉಡುಪಿ ಕೃಷ್ಣ ಮಠ ಖಾಲಿ ಖಾಲಿ

Mar 14, 2020, 3:51 PM IST

ಉಡುಪಿ(ಮಾ.14): ಉಡುಪಿಯಲ್ಲಿ ಕೊರೋನಾ ಭೀತಿ ಹೆಚ್ಚಿದ್ದು, ಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಮಠದ ಮುಂದೆ ಎಂದಿನಂತೆ ಸರತಿ ಸಾಲೂ ಕಂಡು ಬಂದಿಲ್ಲ.

ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

ಕೃಷ್ಣ ಮಠದಲ್ಲಿ ಭಕ್ತರೇ ಇಲ್ಲದೆ ಪಾರ್ಕಿಂಗ್ ಏರಿಯವೂ ಖಾಲಿ ಇದೆ. ಮಠದ ಮುಂದೆ ಸರತಿ ಸಾಲುಗಳೂ ಕಂಡು ಬಂದಿಲ್ಲ. ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ರಥಬೀದಿಯಲ್ಲೂ  ವ್ಯಾಪಾರ ವಹಿವಾಟು ಫುಲ್ ಡಲ್ ಆಗಿದೆ.

ಇತ್ತೀಚೆಗಷ್ಟೇ ಮಣಿಪಾಲದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಬಾಧಿಸುವ ಶಂಕೆ ವ್ಯಕ್ತವಾಗಿದ್ದುಮ ಪರೀಕ್ಷೆಯ ನಂತರ ಇವರೆಲ್ಲರ ರಕ್ತದ ಮಾದರಿ ನೆಗೆಟಿವ್ ಬಂದಿದೆ.