ಮಾಜಿ ಸಚಿವರ ಕಾಲಿಗೆ ಬಿದ್ದ ಮಹಿಳೆಯರು..ಕೊಚ್ಚಿಹೋದ ಸೂರು. ಉಳಿದಿದ್ದು ಕಣ್ಣೀರು..

Aug 6, 2019, 8:41 PM IST

'ನಿಮ್ಮ ಕಾಲಿಗೆ ಬೀಳ್ತಿವಿ, ದಯವಿಟ್ಟು ನಮಗೊಂದು ಸೂರು ಒದಗಿಸಿ'... ಮಳೆಯ ಆರ್ಭಟಕ್ಕೆ ಸಿಕ್ಕಿ ಮನೆ ಕಳೆದುಕೊಂಡ ಮಹಿಳೆಯರ ಗೋಳು ಕೇಳುವುದೆ ಬೇಡ. ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ಕುಟುಂಬದ ಮಹಿಳೆಯರು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ಕಾಲಿಗೆ ಬಿದ್ದು ನೋವು ತೋಡಿಕೊಂಡಿದ್ದಾರೆ.