ಹಾಲಪ್ಪ ಆಚಾರ್‌ಗೆ ಸಚಿವ ಸ್ಥಾನ ಸಿಗಲು ಬೆಂಬಲಿಗರಿಂದ ವಿಶೇಷ ಪೂಜೆ

Feb 1, 2020, 1:41 PM IST

ಕೊಪ್ಪಳ(ಫೆ.01): ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಆಚಾರ್‌ ಅವರಿಗೆ ಸಚಿವ ಸ್ಥಾನ ಸಿಗಲೆಂದು ಹಾಲಪ್ಪ ಬೆಂಬಲಿಗರು ಭಗವಂತನ ಮೊರೆ ಹೋಗಿದ್ದಾರೆ. ಜಿಲ್ಲೆಯ ಯಲಬುರ್ಗಾ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಹಾಲಪ್ಪ ಆಚಾರ್‌ ಅವರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಂತ್ರಿಗಿರಿ ನೀಡಲಿ ಎಂದು ಹಾಲಪ್ಪ ಅವರ ಬೆಂಬಲಿಗರು ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಶಾಸಕ ಹಾಲಪ್ಪ ಆಚಾರ್‌ ಬೆಂಬಲಿಗರು ಹಾಜರಿದ್ದರು.