Haveri: ಜಮೀನು ವಿಚಾರ, ಹೆಣ್ಣು ಮಕ್ಕಳಿಗೆ ಮನಬಂದಂತೆ ಥಳಿಸಿದ ದುರುಳರು

Jan 22, 2022, 4:28 PM IST

ಹಾವೇರಿ (ಜ. 22): ಜಮೀನು ವಿಚಾರಕ್ಕೆ (Land Dispute) ಜಗಳ ತೆಗೆದು ಅಮಾಯಕ ಹೆಣ್ಣು ಮಕ್ಕಳನ್ನು  ದುರುಳರು ಮನಬಂದಂತೆ ಥಳಿಸಿದ್ದಾರೆ. ಹೊಲದಲ್ಲಿನ ಕಲ್ಲು, ಮಣ್ಣಿನ ಹೆಂಟೆಯನ್ನು  ವಯಸ್ಸಾದ ರತ್ನಮ್ಮ ಎಂಬುವವರ ಮೇಲೆ ಎತ್ತಿಹಾಕಿ ಹಲ್ಲೆ ನಡೆಸಿದ್ದಾರೆ. ಜಮೀನು ಪೋಡಿ ವಿಚಾರಕ್ಕೆ ಹಾನಗಲ್ (Hanagal) ತಾಲೂಕು ಕೆಲವರಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಜಮೀನಿನಲ್ಲಿ ವೃದ್ದೆ ರತ್ನಮ್ಮ ಹಾಗೂ ಅವರ ಮಗ ಶಂಕ್ರಪ್ಪ ಮತ್ತು ಅವರ ಪತ್ನಿ ಶಿಲ್ಪಾ  ಕೆಲಸ ಮಾಡುತ್ತಿದ್ದರು.  ಈ ವೇಳೆ ಶಿವಾನಂದ ಮಲ್ಲೇಶಪ್ಪ ಕೋಡಿಹಳ್ಳಿ, ರುದ್ರಪ್ಪ, ರವೀಂದ್ರ, ನಾಗಪ್ಪ ಸೇರಿದಂತೆ 12 ಜನ
ಇವರ ಮೇಲೆ ಹಲ್ಲೆ ನಡೆಸಿದ್ದಾರೆ.  ಹಾನಗಲ್ ತಾಲೂಕು ಆಡೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.