ಇಂದಿನಿಂದ ದೇಗುಲ ಓಪನ್ : ಶೃಂಗೇರಿಯಲ್ಲಿ ಐಡಿ ಕಾರ್ಡ್ ಕಡ್ಡಾಯ

Jul 5, 2021, 10:17 AM IST

ಉಡುಪಿ (ಜು.05): ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್‌ಲಾಕ್‌ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ.  ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

ರಾಜ್ಯಾದ್ಯಂತ ಅನ್‌ಲಾಕ್‌ : ಯಾವ ದೇಗುಲಕ್ಕೆ ಪ್ರವೇಶ - ಯಾವ ದೇಗುಲಕ್ಕೆ ಇಲ್ಲ..? 

ಅದರಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ದೇಗುಲ, ಶೃಂಗೇರಿ ಶ್ರೀ ಶಾರದಾಂಬೆ ದೇಗುಲವು ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಮುಂಜಾಗ್ರತೆ ವಹಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್, ಐಡಿ ಕಾರ್ಡ್  ಇದ್ದರಷ್ಟೆ ಪ್ರವೇಶ ಕಲ್ಪಿಸಲಾಗುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona