ಘೋಷಣೆ ಮಾಡಿದ್ರೆ ಆಯ್ತಾ? ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ!

Dec 3, 2020, 3:36 PM IST

ಚಿಕ್ಕಮಗಳೂರು (ಡಿ.03):  ತಾಲೂಕು ಘೋಷಣೆಯಾದರೂ ತಾಲೂಕು ಕೇಂದ್ರ ಇನ್ನೂ ಮಾಡದ ಹಿನ್ನೆಲೆ  ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲು ಸಭೆ ನಡೆಸಲಾಗಿದೆ. 
ಕಳಸ ಪಟ್ಟಣದಲ್ಲಿ ಸಭೆ ನಡೆಸಿ 6 ಗ್ರಾ.ಪಂ ವ್ಯಾಪ್ತಿಯ ಸ್ಥಳೀಯರು ಈ ನಿರ್ಧಾರ ಮಾಡಿದ್ದಾರೆ. 

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಯಾವೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ನೋಡಿ..

 ಕಳಸ, ಮರಸಣಿಗೆ, ತೋಟದೂರು ಹೊರನಾಡು, ಸಂಸೆ, ಇಡಕನಿ ಸ್ಥಳೀಯರಿಂದ ಸಭೆ ನಡೆದಿದ್ದು, ಭಾನುವಾರ ಪ್ರತಿಭಟನೆ ನಡೆಸಿ ಮನವಿ ಮಾಡಲು ಮುಂದಾಗಿದ್ದಾರೆ. ಮನವಿಗೆ ಸ್ಪಂದಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ.