ಹೆಚ್ಚುತ್ತಿದೆ ಘಟಪ್ರಭೆ ನೀರಿನ ಪ್ರಮಾಣ; ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚನೆ

Oct 15, 2020, 1:36 PM IST

ಬೆಂಗಳೂರು (ಅ. 15): ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಘಟಪ್ರಭ ನದಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ರಸ್ತೆ ಸಂಚಾರ ಬಂದ್ ಆಗಿದೆ. ಸೇತುವೆಗಳು ಜಲಾವೃತವಾಗಿವೆ. 

ಗುರುರಾಯರ ಉತ್ತರಾಧಿ ಮಠ ಮುಳುಗಡೆ; ಜಾನುವಾರಗಳ ರಕ್ಷಣೆಗೆ ಹರಸಾಹಸ

ಚಿತ್ರದುರ್ಗದ ಜನ ಕೂಡಾ ಮಳೆಯ ಅರ್ಭಟಕ್ಕೆ ತತ್ತರಿಸಿದ್ಧಾರೆ. ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ.