Apr 20, 2020, 10:11 PM IST
ಗದಗ (ಏ.20): ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವ್ಯಕ್ತಿ ಮುಂಡರಗಿಯಲ್ಲಿ ಪತ್ತೆಯಾಗಿದ್ದಾನೆ. ಲಾಕ್ಡೌನ್ ಶುರುವಾಗುತ್ತಲೇ ಕಾಣೆಯಾಗಿದ್ದ ಮಲ್ಲಿಕಾರ್ಜುನ ಗುರುಮಠ, ಪಾದಯಾತ್ರೆ ಮೂಲಕ ತನ್ನೂರು ಸೇರಿದ್ದಾನೆ.
ಬೆಂಗಳೂರಿನ ಸುಬ್ರಮಣ್ಯ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುಂಡರಗಿ ಪೊಲಿಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಜೊತೆಗೆ ವಿಚಾರಣೆ ನಡೆಸಿದ್ದಾರೆ.