ಕನ್ನಡ ಪ್ರಭ ವರದಿ ಹೆಸರಲ್ಲಿ ಸುಳ್ಳು ಸಮೀಕ್ಷೆ, ಪತ್ರಿಕೆಯಿಂದ ದೂರು

Mar 15, 2023, 12:41 PM IST

ಕನ್ನಡಪ್ರಭ ಪತ್ರಿಕೆ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್‌ ಆಗಿದ್ದು, ಆರ್‌ ಎಸ್‌ ಎಸ್‌  ಆಂತರಿಕ ಸಮೀಕ್ಷೆ ಬಹಿರಂಗ ‌ಎಂಬ ವರದಿ ಪ್ರಕಟಿಸಲಾಗಿದ್ದು, ಈ ಸುಳ್ಳು ಸುದ್ದಿಯ ಬಗ್ಗೆ ಕನ್ನಡಪ್ರಭ ಸ್ಪಷ್ಟನೆ ನೀಡಿದೆ. ಕನ್ನಡಪ್ರಭ ಪತ್ರಿಕೆಗೂ, ಈ ವರದಿಗೂ ಯಾವುದೇ ಸಂಬಂಧ ಇಲ್ಲ, ಹಾಗೇ ಕನ್ನಡಪ್ರಭ ಇಂಥ ಯಾವುದೇ ಸಮೀಕ್ಷೆ ನಡೆಸಿಲ್ಲ, ಪ್ರಕಟಿಸಿಯೂ ಇಲ್ಲ ಎಂದು ತಿಳಿಸಿದೆ.ಇನ್ನು ಕನ್ನಡಪ್ರಭ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.