ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗಲ್ಲ, ಅದು ಮೂಢನಂಬಿಕೆ: ಸಿಎಂ ಬೊಮ್ಮಾಯಿ

Dec 13, 2022, 5:33 PM IST

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗಲ್ಲ, ಅಧಿಕಾರ ಹೋಗುತ್ತೆ ಎನ್ನುವುದು ಮೂಢನಂಬಿಕೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಚಾಮರಾಜನಗರಕ್ಕೆ ಬಂದ್ರೆ ರಾಜಕೀಯ ಶುದ್ಧಿ ಆಗುತ್ತದೆ, ಬೀದರ್‌ ಮಾದರಿಯಲ್ಲಿ ಚಾಮರಾಜನಗರ ಅಭಿವೃದ್ಧಿ ಮಾಡಬೇಕು. 1000 ಎಕರೆ ಜಾಗದಲ್ಲಿ ಕೈಗಾರಿಕಾ ಟೌನ್‌’ಶಿಪ್ ನಿರ್ಮಿಸಲು ಆದ್ಯತೆ ನೀಡಲಾಗಿದೆ. ಚಾಮರಾಜನಗರದ 121 ಕೆರೆಗಳ ತುಂಬಿಸಲು ಯೋಜನೆ ಇದ್ದು, ಸಮಗ್ರ ಕೆರೆ ಅಭಿವೃದ್ಧಿಗೆ 111 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆ ಇದಾಗಿದೆ ಎಂದರು.