ಹೊಸಪೇಟೆ: ಅಧಿಕಾರಿಗೆ ಅವಾಜ್‌ ಹಾಕಿ ಬೆದರಿಸಿದ ಬಿಜೆಪಿ ಉಚ್ಚಾಟಿತ ಮುಖಂಡ

Jan 1, 2020, 5:18 PM IST

ಬಳ್ಳಾರಿ(ಜ.01): ಬ್ಯಾನರ್ ತೆರವುಗೊಳಿಸಲು ಬಂದಿದ್ದ ನಗರಸಭೆ ಅಧಿಕಾರಿಗಳಿಗೆ ವಿಜಯನಗರದ ಬಿಜೆಪಿ ಉಚ್ಚಾಟಿತ ಮುಖಂಡ ಕವಿರಾಜ್ ಸಾರ್ವಜನಿಕವಾಗಿ ಅವಾಜ್‌ ಹಾಕಿ, ಬೆದರಿಸಿದ ಘಟನೆ(ಇಂದು)ಬುಧವಾರ ನಡೆದಿದೆ. ಹೊಸ ವರ್ಷದ ಶುಭಾಶಯ ಕೋರಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಅಧಿಕಾರಿಗಳು ತೆರವು ಮಾಡಲು ಬಂದಿದ್ದರು. 

ನಗರ ಪಾಲಿಕೆ ಹೆಲ್ತ್ ಇನ್ಸಪೆಕ್ಟರ್ ವೆಂಕಟೇಶ್‌ಗೆ ಕವಿರಾಜ್ ಸಾರ್ವಜನಿಕವಾಗಿ ಅವಾಜ್ ಹಾಕಿ ಹೀರೋ ಆಗಲು ಹೋಗಿದ್ದಾರೆ. ಹೋಗಿ ನಿಮ್ಮ ಮೇಡಂಮ್‌ಗೆ ಹೇಳಿ, ನಾನೇನಾದ್ರು  ಮುನ್ಸಿಪಾಲಿಟಿಗೆ ಬಂದ್ರೆ ದೇವರಾಣೆ ಬೆಂಕಿ ಹತ್ತುತ್ತೆ, ಹೊಸಪೇಟೆ ಶಾಂತವಾಗಿದೆ, ನಿಮ್ಮಿಂದ ಬೆಂಕಿ ಹತ್ತತ್ತೆ ಅಂತಾ ಬೆರಳು ತೋರಿ ಅವಾಜ್ ಹಾಕಿದ್ದಾರೆ. ಬ್ಯಾನರ್ ಇದ್ರೆ ನಿಮ್ಮದೇನು ಗಂಟು ಹೊಗತ್ತೆ? ನಿಮ್ಮಿಂದನೇ ಹೊಸಪೇಟೆ ಇಷ್ಟು ಗಲೀಜಾಗಿದೆ‌ ಎಂದು ನಿಂದಿಸಿದ್ದಾರೆ.