ತನ್ನದೆ ಹೊಲದ ಅಪಾರ ಈರುಳ್ಳಿ ಬೆಳೆ ನಾಶ ಮಾಡಿದ ಬಳ್ಳಾರಿ ರೈತ

Aug 2, 2020, 9:46 PM IST

ಬಳ್ಳಾರಿ(ಆ. 02)  ಈರುಳ್ಳಿ ಬೆಳೆಗೆ ವಿಚಿತ್ರ ರೋಗ  ಕಂಡು ಬೇಸರಗೊಂಡ ರೈತ ಬೆಳೆ ನಾಶ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿಯಲ್ಲಿ  ರೈತರೊಬ್ಬರು ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ.

ಕೊರೋನಾ ನಡುವೆ ಕಾಫಿ ಬೆಳೆಗಾರರಿಗೆ ದೊಡ್ಡ ಶಾಕ್

ಟ್ರಾಕ್ಟರ್‌ನಿಂದ ಎರಡು ಎಕರೆ ಈರುಳ್ಳಿ ಬೆಳೆ ನಾಶ ಮಾಡಿದ ರೈತ ಹಾಲೇಶಪ್ಪ ವಿಚಿತ್ರ ಕಾಯಿಲೆಗೆ ಕೃಷಿ ತಜ್ಞರ ಸಲಹೆಯಂತೆ ಹತ್ತಾರು ಔಷಧ ಸಿಂಪಡಣೆ ಮಾಡಿದ್ದರು. ರೋಗ ನಿಯಂತ್ರಣಕ್ಕೆ ಬಾರದ ಕಾರಣ ಬೆಳೆಯನ್ನೇ ನಾಶ ಮಾಡಲಾಗಿದ್ದು ಅಪಾರ ನಷ್ಟವಾಗಿದೆ.