ಮಳೆರಾಯ ಸಾಕು ಮಾಡಪ್ಪಾ.. ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ಉಳಿದಿರುವುದು ಹನಿ ನೀರು

Oct 7, 2019, 8:47 PM IST

ಬಾಗಲಕೋಟೆ/ಗದಗ[ಅ. 07]  ನೆರೆಯ ಸಂಕಷ್ಟ ಸದ್ಯಕ್ಕೆಂತೂ ಮುಗಿಯುವ ಲಕ್ಷಣ ಕಾಣುತ್ತಲೇ ಇಲ್ಲ. ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗುತ್ತಿದೆ.

ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೊಲ ಗದ್ದೆಗಳಲ್ಲಿ ನೀರು ನಿಂತು ಕೈಗೆ ಬಂದ ಬೆಳೆ ನಾಶವಾಗಿ ಹೋಗುತ್ತಿದೆ.