ಅಕ್ಕ ದಯಮಾಡಿ ಬನ್ನಿ- ನಮ್ಮ ಕ್ಷೇತ್ರದಲ್ಲೂ ಗಣಿಗಾರಿಕೆ ನಿಲ್ಲಿಸಿ : JDS ಶಾಸಕ ಸುರೇಶ್ ಗೌಡ

Jul 12, 2021, 10:17 AM IST

ಮಂಡ್ಯ (ಜು.12):  ಅಕ್ಕ ದಯಮಾಡಿ ಬನ್ನಿ ಎಂದು ಸಂಸದೆ ಸುಮಲತಾಗೆ ನಾಗಮಂಗಲ JDS ಶಾಸಕ ಸುರೇಶ್ ಗೌಡ ಮನವಿ ಮಾಡಿದ್ದಾರೆ.  ನಾಗಮಂಗಲದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.  ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಅಕ್ರಮ ನಿಂತಿಲ್ಲ.  ಸಿಎಂ ಯಡಿಯೂರಪ್ಪ ಅವರೇ ಅಕ್ರಮ ಗಣಿಗಾರಿಕೆಯನ್ನ ಸಕ್ರಮ ಮಾಡಿಕೊಳ್ಳಿ ಎಂದಿದ್ದಾರೆ.

ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ ಎಂದ ಸಚಿವ

ಹೀಗಾಗಿ ನಾವು ಏನು ಮಾಡಲು ಆಗುತ್ತಿಲ್ಲ. ಈಗ ಅಕ್ಕ ಎದ್ದವರೇ, ಅವರ ಹೋರಾಟಕ್ಕೆ ಜಯವಾಗಲಿ. ಅವರ ಜೊತೆ ನಾವು ಹೋಗುತ್ತೇವೆ, ಬಂದು ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಲಿ. ದಯಮಾಡಿ ಅಕ್ಕನ ಬಳಿ ಬೇಡಿ ಕೊಳ್ತೀನಿ. ನಾನು ನಿಮ್ಮೊಂದಿಗೆ ಬರುತ್ತೇನೆ, ನಿಮಗೆ ಯಾವುದೇ ತೊಂದರೆ ಆಗದ ಹಾಗೇ ನೋಡಿಕೊಳ್ತೀನಿ ಎಂದು ಹೇಳಿದ್ದಾರೆ.