ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ 45 ಜೀತದಾಳುಗಳ ರಕ್ಷಣೆ

Dec 18, 2020, 5:50 PM IST

ಶಿವಮೊಗ್ಗ (ಡಿ. 18):  ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಗುತ್ತಿಗೆ ಆಧಾರದ 45 ಕಾರ್ಮಿಕರನ್ನು ಸಾಗರ  ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಬಿಡುಗಡೆಗೊಳಿಸಿದೆ. 

ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳು; ಓಡಿಸಲು ಅಧಿಕಾರಿಗಳ ಹರಸಾಹಸ

ಕ್ಯಾಂಪಸ್‌ನಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪೈಕಿ ಜೀತದಾಳುಗಳಿಲ್ಲ ಎಂದು ಕಾಮಗಾರಿ ಮುಖ್ಯಸ್ಥರು  ಹಾರಿಕೆಯ ಉತ್ತರ ಕೊಟ್ಟಿದ್ದರು.  ನಂತರ ಕಾರ್ಮಿಕರ ಶೆಡ್ ಪರಿಶೀಲಿಸಿದಾಗ ಅಲ್ಲಿ 12 ಪುರುಷರು , 17 ಮಹಿಳೆಯರು ಮತ್ತು 16 ಮಕ್ಕಳು ಸೇರಿ 45  ಮಂದಿ ಇದ್ದಿದ್ದರು. ಒಂದು ಕುಟುಂಬಕ್ಕೆ ತಲಾ 50 ಸಾವಿರ ದಿಂದ ಒಂದು ಲಕ್ಷ ರೂ . ಮುಂಗಡ ನೀಡಿದ್ದರು.  ಪ್ರತಿ ತಿಂಗಳು ಕಾರ್ಮಿಕರಿಗೆ 5,500 ಸಂಬಳ ನಿಗದಿ ಮಾಡಲಾಗಿತ್ತು. ಮೂರು ವರ್ಷಗಳಿಂದ ಊರಿಗೆ ಹೋಗಲು ಬಿಟ್ಟಿಲ್ಲ, ನಮ್ಮನ್ನು ಕಳುಹಿಸಿ ಕೊಡಿ  ಎಂದು ಕಾರ್ಮಿಕರು ಕೇಳಿಕೊಂಡಿದ್ದಾರೆ.