ಪಂಜಾಬ್‌ನ ರೊಟ್ಟಿ ತಿನ್ನುವ ಸೌಭಾಗ್ಯ ನನಗೆ ಸಿಕ್ಕಿದೆ: ಸಿಖ್ಖರ ಮನವೊಲಿಕೆಗೆ ಮೋದಿ ಯತ್ನ!

Feb 8, 2021, 2:02 PM IST

ನವದೆಹಲಿ(ಫೆ.08) ರಾಷ್ಟ್ರಪತಿ ಭಾಷಣ ರಾಮನಾಥ್ ಕೋವಿಂದ್ ಅವರ ಭಾಷಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಡಿದ್ದ ಭಾಷಣ ಅತ್ಯಂತ ಶಕ್ತಿಶಾಲಿಯಾಗಿತ್ತು ಮತ್ತು ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಅಲ್ಲದೇ ದೇಶ ವಿಭಜನೆಯ ವೇಳೆ ಅತೀ ಹೆಚ್ಚು ಕಷ್ಟ ಎದುರಿಸಿದ್ದು ಪಂಜಾಬ್, 1984 ಧಂಗೆಯಲ್ಲಿ ಅತೀ ಹೆಚ್ಚು ತೊಂದರೆಯಾಗಿದ್ದು ಪಂಜಾಬ್‌ಗೆ. ಕೆಲವರು ಸಿಖ್ ಬಂಧುಗಳ ತಲೆಯಲ್ಲಿ ತಪ್ಪು ಮಾಹಿತಿ ತುಂಬುತ್ತಿದ್ದಾರೆ. ಈ ದೇಶಕ್ಕಾಗಿ ಸಿಖ್ ಬಂಧುಗಳು ಬಹಳಷ್ಟು ತ್ಯಾಗ ಮಾಡಿದ್ದಾರೆ ಗೊತ್ತಾ? ಎಂದು ಮೋದಿ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ.