ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಕನ್ನಡಿಗ ಶ್ರೀನಿವಾಸ್‌ರಿಂದ ಸಿಂಘೂ ಗಡಿಯಲ್ಲಿ ರೋಟಿ ಸೇವೆ

Dec 8, 2020, 10:40 PM IST

ನವದೆಹಲಿ, (ಡಿ.08): ಮೊನ್ನೇ ಮೊನ್ನೇ ಅಷ್ಟೇ ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕವಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿವಿ ಶ್ರೀನಿವಾಸ್‌ ಅವರು ರೈತರ ನೆರವಿಗೆ ನಿಂತಿದ್ದಾರೆ.

ಕಾಂಗ್ರೆಸ್ ಯುವ ಘಟಕ ಅಧ್ಯಕ್ಷರ ನೇಮಕ: ರಾಷ್ಟ್ರೀಯ ಪಕ್ಷಗಳಲ್ಲಿ ಕನ್ನಡಿಗರದ್ದೇ ಹವಾ..!

ಹೌದು..ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿ ರಾಷ್ಟ್ರ ರಾಜಧಾನಿಯ ಸಿಂಘೂ ಗಡಿ ಭಾಗದಲ್ಲೇ ಸಹಸ್ರಾರು ರೈತರು ಹೋರಾಟ ಮುಂದುವರೆಸಿದ್ದಾರೆ. ಇನ್ನು ಇವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರು ರೋಟಿ ಸೇವೆ ಮಾಡುತ್ತಿದ್ದಾರೆ.