Aug 5, 2020, 1:05 PM IST
ಬೆಂಗಳೂರು(ಆ.05): ಶತಮಾನಗಳ ರಾಮ ಭಕ್ತರ ಕನಸು ನನಸಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
ರಾಮ ಮಂದಿರ ಭೂಮಿ ಪೂಜೆಗೆ ಮುಹೂರ್ತವಿಟ್ಟಿದ್ದು ಕನ್ನಡದ ವಿದ್ವಾಂಸರು ಎನ್ನುವುದು ಮತ್ತೊಂದು ವಿಶೇಷ. ವಿದ್ಯಾವಿಹಾರ ವಿದ್ಯಾಪೀಠದ ಕುಲಪತಿಗಳಾದ NR ವಿಜಯೇಂದ್ರ ಶರ್ಮಾ ಒಳ್ಳೆಯ ಮುಹೂರ್ತವನ್ನಿಟ್ಟುಕೊಟ್ಟಿದ್ದಾರೆ.
ಜೈ ಶ್ರೀರಾಮ್: ರಾಮಭಕ್ತರ ಕನಸು ಕೊನೆಗೂ ನನಸು
ರಾಮ ಮಂದಿರ ನಿರ್ಮಾಣಕ್ಕೆ ಮುಹೂರ್ತವಿಟ್ಟುಕೊಟ್ಟ ವಿಜಯೇಂದ್ರ ಶರ್ಮಾ ಸುವರ್ಣ ನ್ಯೂಸ್ ಜತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶುಭ ಹಾರೈಸಿದ್ದಾರೆ.