ಅನಗತ್ಯ ಗರ್ಭಕೋಶ ಸರ್ಜರಿ : ಡಾಕ್ಟರ್‌ ವಿರುದ್ಧ ಮಹಿಳೆಯರ ಪ್ರತಿಭಟನೆ

Apr 26, 2022, 7:53 PM IST

ಅನಗತ್ಯವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಮಹಿಳೆಯರು ಹಾಗೂ ವೈದ್ಯರ ಮಧ್ಯೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಡಿಸಿ, ಎಸ್ಪಿ ಮನವಿಗೂ ಮಹಿಳೆಯರು ಸ್ಪಂದಿಸದೇ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹೊಟ್ಟೆನೋವು ಕಾರಣಕ್ಕೆ ಗರ್ಭಕೋಶವನ್ನೇ ತೆಗೆದಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ರಾಣೆಬೆನ್ನೂರಿನಲ್ಲಿ ಡಾ. ಶಾಂತ ಪಂದನ್ನಾರ್ ಅವರು 1522 ಮಹಿಳೆಯರಿಗೆ ಅನಗತ್ಯವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದಾದ ಬಳಿಕ ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ ಎಂದು ತಿಳಿದು ಬಂದಿದೆ.