ಪಾಂಡುರಾಜನಿಗೆ ಮಕ್ಕಳಾಗದೇ ಇರಲು ಕಾರಣ ಋಷಿಶಾಪ..ಮುಂದೇನಾಯ್ತು.?

May 2, 2021, 11:20 AM IST

ಒಂದು ದಿನ ಪಾಂಡುರಾಜ ಬೇಟೆಗೆ ಹೋದಾಗ, ಜಿಂಕೆ ರೂಪದಲ್ಲಿದ್ದ ಋಷಿ ದಂಪತಿಗಳನ್ನು ಹೊಡೆದು ಸಾಯಿಸುತ್ತಾನೆ. ಸಾಯುವಾಗ ಋಷಿ ದಂಪತಿಗಳು, ನೊಂದು ನೀನು ಸ್ತ್ರೀಯನ್ನು ಸೇರುವಾಗ ಸಾವನ್ನಪ್ಪು ಎಂದು ಶಪಿಸಿ ಸಾಯುತ್ತಾರೆ. ಮಕ್ಕಳಿಗಾಗಿ ತಪಿಸಿದ ಪಾಂಡುರಾಜ, ಕುಂತಿಯನ್ನು ಕರೆದು, ನೀನು ಋಷಿಮುನಿಗಳನ್ನು ಪ್ರಾರ್ಥಿಸಿ ಮಕ್ಕಳನ್ನು ಪಡೆದುಕೋ ಎನ್ನುತ್ತಾನೆ. ಆಗ ಕುಂತಿ, ನನಗೆ ದೂರ್ವಾಸರ ಮಂತ್ರೋಪದೇಶವಿದೆ. ಪ್ರಾರ್ಥಿಸುತ್ತೇನೆ ಎಂದು 3 ಮಕ್ಕಳನ್ನು ಪಡೆಯುತ್ತಾಳೆ. ಮಾದ್ರಿ ದೇವಿ 2 ಮಕ್ಕಳನ್ನು ಪಡೆಯುತ್ತಾನೆ. ಒಂದು ದಿನ ಮಾದ್ರಿದೇವಿಯತ್ತ ಮೋಹಿತನಾಗಿ ಮುಟ್ಟುತ್ತಾನೆ. ಋಷಿ ಶಾಪದಿಂದ ಪಾಂಡುರಾಜ ಸಾವನ್ನಪ್ಪುತ್ತಾನೆ.