ಶ್ರೀದೇವಿ ಭಾಗವತದಲ್ಲಿ ಸರಸ್ವತಿ ಬೀಜ ಮಂತ್ರಾಕ್ಷರದ ಮಹತ್ವ

Jun 21, 2021, 11:27 AM IST

ಅಂಗರಾಜ ಕುಮಾರನಾದ ಚಾಕ್ಷುಕ ಎಂಬಾತ ಪುರಹ ಎಂಬ ಬ್ರಹರ್ಶಿ ಬಳಿ ಉಪದೇಶ ಪಡೆದು, ಮಹಾ ಸರಸ್ವತಿ ಬೀಜ ಜಪಿಸಿ, 12 ವರ್ಷಗಳ ಕಾಲ ತಪಸ್ಸು ಮಾಡಿ, ಮಾತೆಯ ದರ್ಶನ ಪಡೆದ. ಅಮ್ಮನವರ ಅನುಗ್ರಹದಿಂದ 6 ನೇ ಮನುವಾದ.

ತಪಸ್ಸಿನಲ್ಲಿ ಮೊದಲ ವರ್ಷ ಚಿಗುರು ಎಲೆಗಳನ್ನು ತಿಂದು, 2 ನೇ ವರ್ಷ ನೀರನ್ನು ಸೇವಿಸುತ್ತಾ, 3 ನೇ ವರ್ಷದಲ್ಲಿ ವಾಯುಸೇವನೆಯಿಂದ 12 ವರ್ಷ ಕಳೆಯುತ್ತಾನೆ. ಚಾಕ್ಷುಕ ಮನು ದೇಹತ್ಯಾಗದ ಬಳಿಕ ದೇವಿಯ ಪರಂಧಾಮವನ್ನು ಸೇರುತ್ತಾನೆ. ಇದು ಸರಸ್ವತಿ ಬೀಜ ಮಂತ್ರಕ್ಕಿರುವ ಶಕ್ತಿ ಎಂದು ದೇವಿಭಾಗವತದಲ್ಲಿ ಹೇಳಲಾಗಿದೆ.