ಮಹಾಭಾರತ: ಅಮೃತಕ್ಕಾಗಿ ದೇವತೆಗಳು ನಡೆಸಿದ ಸಮುದ್ರ ಮಥನದ ಕಥೆಯಿದು

Aug 7, 2021, 4:35 PM IST

ಒಂದು ದಿನ ದೇವತೆಗಳೆಲ್ಲಾ ಮೇರು ಪರ್ವತದಲ್ಲಿ ಸೇರಿದ್ದರು. ಅವರೆಲ್ಲರೂ ಸೇರಿ ಅಮೃತ ಪಡೆಯುವ ಬಗ್ಗೆ ಯೋಚಿಸುತ್ತಾರೆ. ಆಗ ಮಹಾವಿಷ್ಣು ಬ್ರಹ್ಮನಿಗೆ ಕ್ಷೀರ ಸಾಗರದಲ್ಲಿ ಮಥನ ಮಾಡಿ ಅಮೃತ ಪಡೆಯುವ ಬಗ್ಗೆ ಉಪಾಯ ಹೇಳುತ್ತಾನೆ. ಎಲ್ಲರೂ ಸಮ್ಮತಿಸುತ್ತಾರೆ. ಮಂದರ ಪರ್ವತವನ್ನು ಕಡಗೋಲಾಗಿ ಇಟ್ಟುಕೊಳ್ಳಲು ನಿರ್ಧರಿಸುತ್ತಾರೆ. ನನಗೆ ಅಮೃತ ಕೊಡುವುದಾದರೆ ನಾನು ಮಥನಕ್ಕೆ ಒಪ್ಪುತ್ತೇನೆ ಎಂದು ಸಮುದ್ರ ರಾಜ ಹೇಳುತ್ತಾನೆ. ಅದರಂತೆ ದೇವತೆಗಳು ಒಪ್ಪಿಕೊಳ್ಳುತ್ತಾರೆ. ಮುಂದೆ ಸಮುದ್ರ ಮಥನ ಹೇಗೆ ನಡೆಯುತ್ತದೆ..? ಇಲ್ಲಿದೆ ಕತೆ.