ಸಂಸಾರದಲ್ಲಿದ್ದುಕೊಂಡು ಜೀವನ್ಮುಕ್ತರಾಗುವುದು ಹೇಗೆ..? ಇರುವೆಯ ಉದಾಹರಣೆ ಕೊಟ್ಟ ಜನಕರು

Apr 26, 2021, 5:01 PM IST

ಜನಕ ಮಹಾರಾಜ ಅಜಾತಶತ್ರು. ಜೀವನ್ಮುಕ್ತನಾಗಿದ್ದ. ಜನಕ ಮಹಾರಾಜನನ್ನು ಭೇಟಿ ಮಾಡಲು ಶುಕರು ಮಿಥಿಲಾ ನಗರಕ್ಕೆ ಬರುತ್ತಾರೆ. ಜನಕರನ್ನು ಭೇಟಿ ಮಾಡಿ, ಸಂಸಾರದಲ್ಲಿದ್ದುಕೊಂಡು, ಹೇಗೆ ಮುಕ್ತರಾಗಿದ್ದೀರಿ..? ಹೇಗೆ ಭವ ಬಂಧನದಿಂದ ದೂರ ಇದ್ದೀರಿ.? ಎಂದು ತಮ್ಮ ಮನಸ್ಸಿನ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಆಗ ಜನಕರು ಇರುವೆಯ ಉದಾಹರಣೆ ಮೂಲಕ ಸಂದೇಹಗಳಿಗೆ ಉತ್ತರ ನೀಡುತ್ತಾರೆ.