ದತ್ತವಾಣಿ: ಶಂತನು ವಂಶೋದ್ಧಾರಕ್ಕೆ ಸತ್ಯವತಿಗೆ ಭೀಷ್ಮನ ಸಲಹೆ ಇದು

Sep 17, 2021, 1:26 PM IST

ವಿಚಿತ್ರ ವೀರ್ಯ ಬೆಳೆದು ಪ್ರಾಪ್ತ ವಯಸ್ಸಿಗೆ ಬರುತ್ತಾನೆ. ಭೀಷ್ಮ ಇವನಿಗೆ ಮದುವೆ ಮಾಡಲು ಯೋಚಿಸುತ್ತಾನೆ. ಅದೇ ಸಮಯಕ್ಕೆ ಕಾಶೀ ರಾಜನ ಮಕ್ಕಳ ಸ್ವಯಂವರ ವಿಚಾರ ಭೀಷ್ಮನಿಗೆ ತಿಳಿಯಿತು. ಭೀಷ್ಮ ನೇರವಾಗಿ ಕಾಶೀರಾಜನ ಆಸ್ಥಾನಕ್ಕೆ ಹೋಗುತ್ತಾನೆ. ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯನ್ನು ಬಲವಂತವಾಗಿ ರಥಕ್ಕೆ ಹತ್ತಿ ಎನ್ನುತ್ತಾನೆ. ಅಲ್ಲಿದ್ದ ರಾಜರ ಜೊತೆ ಯುದ್ಧ ಮಾಡಿ ಗೆದ್ದು ತಮ್ಮ ರಾಜ್ಯಕ್ಕೆ ಕರೆ ತರುತ್ತಾನೆ. ಅಂಬಿಕೆ, ಅಂಬಾಲಿಕೆ ಜೊತೆ ವಿಚಿತ್ರವೀರ್ಯನಿಗೆ ಮದುವೆಯಾಗುತ್ತದೆ.  16 ವರ್ಷಗಳ ಕಾಲ ದಾಂಪತ್ಯ ನಡೆಸುತ್ತಾನೆ. ಕೊನೆಗೆ ಕ್ಷಯರೋಗಕ್ಕೆ ತುತ್ತಾಗುತ್ತಾನೆ. ಮುಂದೇನಾಗುತ್ತದೆ..? ಸ್ವಾಮೀಜಿ ಹೇಳ್ತಾರೆ.